ನನ್ನ ನಡೆ

ಏರುವ ಹೊತ್ತಿನಲಿ
ಬದುಕು ಕಟ್ಟುವ, ಕಟ್ಟಿಕೊಳ್ಳುವ
ಕಾಯಕದಲಿ ನಿಯೋಜಿತನಾಗಿ
ಹೊರಬಂದೆ; ಮಣ್ಣಿಂದ ದೂರವಾದೆ.

ಜೀವ ಹೂ ಸಮಯದಲಿ
ಉತ್ಸಾಹದಲಿ ಬಳಸಿ ಅವಕಾಶ, ಪರಿಸರವ
ಸ್ನೇಹ ಸಹಕಾರ ನಂಬಿ
ಆಡುತ್ತಾ ಹಗುರಾಗಿ
ಕಚ್ಚೆ, ಕೈ, ಬಾಯಿ ವೈನಾಗಿರಿಸಿ
ಕಲಿಕೆಯನ್ನು ಗೌರವಿಸಿ
ಆಗುವುದಾದರೆ ನೆರವು ನೀಡಿ, ಸಾಂತ್ವನವ ಮಾಡಿ
ಆಗದಿರೆ ತೆಪ್ಪಗಿರಿ
ತಪ್ಪಿ ಕೇಡ ಬಗೆಯದಿರಿ
ಎಚ್ಚರಿರಿ ಕೊಂದುಕೊಳ್ಳದಿರಿ ನಿಲುವಿನಲಿ
ದುಡಿದೆ; ಪ್ರೀತಿ ಪಡೆದೆ
ಹೊಸ ಹೊಸ ಸಂಬಂಧಗಳ ಬೆಸೆದುಕೊಂಡೆ

ಜೀವನದ ಸಂಜೆಯಲಿ
ಕೊರಗುತಿರುವೆ
ಏನು ನೋಡಿದೆ? ಏನು ತಿಳಿದೆ?
ಎಂಬೀ ವಿಧದ ಪ್ರಶ್ನೆಗಳಿಗೆ ಉತ್ತರ ಸಿಗದೆ.

ಯೋಜಿಸುತ್ತಿರುವೆ
ಉಳಿಯಲಿಕೆ ಉಪಯುಕ್ತನಾಗಿ
ನಡೆಯಲಿಕೆ ಸಮಾಧಾನವಾಗಿ
ಕಾಪಿಟ್ಟು ಈ ಸಟ್ಟೆಯನು
ಅಧ್ಯಯನ ಯೋಗ್ಯವಾಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಆಲದ ಮರವೂ, ಒಬ್ಬ ಹುಡುಗನ ಪುಟ್ಟ ಕತ್ತಿಯೂ
Next post ಅವರಿವರ ತೆಗಳದೇ ಬರೆಯಲಾಗದೇ ?

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

cheap jordans|wholesale air max|wholesale jordans|wholesale jewelry|wholesale jerseys